ಸದಾ ಸಮಾಜದ ಬಗ್ಗೆ ಚಿಂತಿಸುತ್ತಿದ್ದ ಹಿರಿಯಣ್ಣ, ಕವಿ ಚೆನ್ನಣ್ಣ ವಾಲೀಕಾರ ಇನ್ನಿಲ್ಲ.
ಚೆನ್ನಣ್ಣನ ಜೊತೆ (ಹೆಚ್ಚು ಕಮ್ಮಿ ಮೂವತ್ತು ವರ್ಷಗಳ ಹಿಂದೆ) ಹತ್ತು ದಿನಗಳ ಕಾಲ ಉರ್ದು ಸಾಹಿತ್ಯವನ್ನು ಅನುವಾದ ಮಾಡುವಾಗ `ತಂಗಿ, ನೀನು ದೈವೀ ಸ್ವರೂಪಳು’ ಎಂದು ತಮಾಷೆ ಮಾಡುತ್ತಿದ್ದರು.
ಹಾಗೆ `ನಿನ್ನ ಕಣ್ಣಿಗೆ ಅಸ್ವಸ್ಥ, ಅನಾರೋಗ್ಯಕರ ಸಮಾಜವನ್ನು ಸ್ವಸ್ಥಗೊಳಿಸುವ ಶಕ್ತಿ ಇದೆ’ ಎಂದು ಹೇಳುತ್ತಿದ್ದರು.
ಇದೆಲ್ಲ ಅಣ್ಣನ ತಮಾಷೆಯೆಂದು ನಕ್ಕು ಸುಮ್ಮನಾಗಿದ್ದೆ.
ಆದರೆ ನಾನು ಅಲ್ಲಿಂದ ಬರುವ ದಿನ ಚೆನ್ನಣ್ಣ ಹೀಗೊಂದು ಕವಿತೆ ಬರೆದುಕೊಟ್ಟಿದ್ದರು. ಅದನ್ನು ಜೋಪಾನವಾಗಿ ಇಟ್ಟಿದ್ದೇನೆ.
ಇಲ್ಲೂ ಚೆನ್ನಣ್ಣನಿಗೆ ಸಮಾಜದ್ದೇ ಚಿಂತೆ..







ಕಣ್ಣುಗಳನ್ನು ಬುಲೆಟ್ಟಿಗೆ ಹೋಲಿಸಿದ್ದನ್ನು ಇದೇ ಮೊದಲು ಓದಿದ್ದು ಕಮಲಾ. ನೀವು ಇದನ್ನು ಜತನವಾಗಿರಿಸಿದ್ದೀರಿ. ಇನ್ನು ಈ ಸಾಲುಗಳನ್ನು ಮರೆಯಲಾಗದು ನೋಡಿ.