**
ಯಲ್ಲಾಪುರದ ಸಾಹಿತ್ಯ ಪ್ರೇಮಿ, ಸಾಹಿತ್ಯ ಸಂಘಟಕ ಮಂಜುನಾಥ ಪಟಗಾರ ಅವರು ಕನ್ನಡದಲ್ಲಿ ಸಾಹಿತ್ಯ ಬರೆಯುವವರನ್ನು ಪ್ರೋತ್ಸಾಹಿಸಲು ತಮ್ಮ ತಾಯಿಯವರ ಹೆಸರಿನಲ್ಲಿ ‘ಮಾತೆ ಗಣಪಿ ತಿಪ್ಪಯ್ಯ ಪಟಗಾರ ಸಾಹಿತ್ಯ ಪ್ರಶಸ್ತಿ’ ಸ್ಥಾಪಿಸಿದ್ದಾರೆ.
5 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಹಾಗೂ ಸನ್ಮಾನಗಳನ್ನೊಳಗೊಂಡ ಈ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಈ ಸಲ (2023) ಕಥಾ ಸಂಕಲನಕ್ಕೆ ನೀಡಲು ಉದ್ದೇಶಿಸಲಾಗಿದೆ.
ಹಾಗಾಗಿ 2023 ರಲ್ಲಿ ಪ್ರಕಟವಾದ ಕಥಾ ಸಂಕಲನದ ಎರಡು ಪ್ರತಿಗಳನ್ನು 30 ಮೇ 2024 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.
**
ಶ್ರೀ ಮಂಜುನಾಥ ಟಿ. ಪಟಗಾರ
ಅಧ್ಯಕ್ಷರು
ನವಚೇತನ ಸಾಂಸ್ಕೃತಿಕ ಕಲಾ ಸಾಹಿತ್ಯ ವೇದಿಕೆ ಬಾಳಗಿಮನೆ
ಪೋಸ್ಟ್: ಬಾಳಗಿಮನೆ -581359
ತಾ: ಯಲ್ಲಾಪುರ
ಉತ್ತರ ಕನ್ನಡ ಜಿಲ್ಲೆ
ಮೊ: 9449148467
0 ಪ್ರತಿಕ್ರಿಯೆಗಳು