ಕತ್ತಲೆ : ಒಳ-ಹೊರಗೂ
ಕು ಸ ಮಧುಸೂದನ್
ಕಡುಬೇಸಿಗೆ ನಡೂಹಗಲ ಅಗ್ನಿಕುಲುಮೆಯೊಳಗೆ ಸೂರ್ಯ
ತಟಕ್ಕನೆ ಕವಿದ ಕರಿಮೋಡಗಳ ಕಪ್ಪಲ್ಲಿ ಕರಗಿದಾಗ
ನನ್ನ ದ್ವನಿ ಪೆಟ್ಟಿಗೆ ಉಡುಗಿ ಹೋಯಿತು
ಜಗತ್ತಿನಷ್ಟೂ ಮಾತುಗಳು ಸತ್ತು ಹೋದವು
ಶಬ್ದಗಳು ನಿಶ್ಯೇಷವಾಗಿ
ಅರ್ಥಗಳು ಅವಶೇಷವಾಗಿ
ಬರಿಯ ಸಂಕೇತಗಳಷ್ಟೇ ಉಳಿದು ಕೊಂಡವು
ಆಗ
ಯಾರೋ ತೋಡಿಟ್ಟ ಸಮಾಧಿಯೊಳಗೆ
ನನ್ನ ಬಲವಂತವಾಗಿ ಕೂರಿಸಿ
ಹಣೆಗೆ ವಿಭೂತಿ ಹಚ್ಚಿ
ಹಾರ ಹಾಕಿ
ಊದಿನ ಕಡ್ಡಿ ಹಚ್ಚಿ ಪೂಜಿದರು
ಬದುಕಿದ್ದೇನೆಂದು ಕೂಗಿಕೊಂಡ ನನ್ನ ಶಬ್ದಗಳು
ಯಾರನ್ನೂ ತಲುಪದೇ ಗಾಳಿಯಲಿ ಲೀನವಾದವು
ಹೊತ್ತು ಮುಳುಗುವುದರೊಳಗಾಗಿ ಸಮಾಧಿಮುಚ್ಚಲು
ಹಟಕ್ಕೆ ಬಿದ್ದವರಂತೆ
ಆಳಿಗೊಂದೊಂದು ಹಿಡಿಮಣ್ಣು ಹಾಕಿ
ಹೊರಟುಹೋದರು
ಹಾಲು ತುಪ್ಪ ಬಿಡುವ ಶುಭಗಳಿಗೆಯ ಬಗ್ಗೆ
ಮಾತಾಡುತ್ತ!
ಒಳಗೆ ಮಾತ್ರವಲ್ಲ
ಹೊರಗೆಯೂ ಕತ್ತಲೆ
channagide sir
Kavana chennaagide sir! Nanna kavanada eradu saalu nenepige bantu.” Uduruva varegu eleyannu appi hidiyuttade maravu, uduruva munnave oppi odaruttide maanava sambandhavu “!