ಒಂದು ಮಧುರವಾದ ಗೀತೆಯನ್ನು ಆಕಾಶವಾಣಿಯಲ್ಲಿ ಆಲಿಸಿದೆ..

ಗೋಪಾಲ ವಾಜಪೇಯಿ

ಇವೊತ್ತು ಮುಂಜಾನೆ ನಾನು ಮನ್ನಾ ಡೇ ಹಾಡಿದ, ಅರ್ಥಪೂರ್ಣ ಸಾಹಿತ್ಯದ ‘ಜಯತೆ ಜಯತೆ ಜಯತೆ…. ಸತ್ಯಮೇವ ಜಯತೆ…’ ಎಂಬ ಒಂದು ಮಧುರವಾದ ಗೀತೆಯನ್ನು ಆಕಾಶವಾಣಿಯಲ್ಲಿ ಆಲಿಸಿದೆ. ಇಡೀ ದಿನ ಅದೇ ಗುಂಗಿನಲ್ಲಿ ಸಂಚರಿಸಿದೆ. ‘ಮಾರ್ಗದರ್ಶಿ’ ಚಿತ್ರಕ್ಕಾಗಿ ಕು. ರಾ. ಸೀತಾರಾಮ ಶಾಸ್ತ್ರಿ ಅವರು ಬರೆದ, ಜಯದೇವ ರಾಗ ಸಂಯೋಜನೆಯ ಈ ಗೀತೆಯ ಒಂದೊಂದು ಸಾಲೂ ನಿಜಕ್ಕೂ ಮಾರ್ಗದರ್ಶಿಯೇ… ಅದರ ಕೆಲವು ಸಾಲುಗಳು ಇಲ್ಲಿವೆ. ——- ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವಾ… ——- ಮಧುವಿಗಿಂತ ಮಧುರವಾದ ಮಾತು ಮನಸು ಕಾಯಕ ಬೆಳೆಸಿಕೊಂಡು ಬಂದ ನರನ ಬಾಳು ಬದುಕು ದೈವಿಕ. ——- ಮಧುರ ಭಾವ ತುಂಬಿದಂಥ ಮನಸೇ ದೇವ ಮಂದಿರ ಸಾತ್ವಿಕನಿಗೆ ನಿಲುಕದಂಥ ನಿಧಿಯೇ ಇಲ್ಲ ಬಲ್ಲಿರ? ——- ಸರಳಜೀವಿಗೆಂದಿಗೂ ಸೋಲೇ ಇಲ್ಲ ಕಾಣಿರಾ ——- ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ?  ]]>

‍ಲೇಖಕರು G

May 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Patali

    In fact Mannadey ‘s kannada pronunciation,,deva “Karama kanda” nimigobbarige preethi,,,,,

    ಪ್ರತಿಕ್ರಿಯೆ
  2. ಟಿ.ಕೆ.ಗಂಗಾಧರ ಪತ್ತಾರ

    ಈ ಹಾಡು ಮಾರ್ಗದರ್ಶಿ ಚಿತ್ರದ್ದಲ್ಲ. ಕಲ್ಪವೃಕ್ಷ ಚಿತ್ರದ್ದು. ಬೆಂಗಳೂರಿನಲ್ಲಿಯೇ ನೆಲೆಸಿದ್ದು ಇತ್ತೀಚೆಗೆ 90ನೇ ವಯಸ್ಸಿನಲ್ಲಿ ನಿಧನರಾದ ಶಾಸ್ತ್ರೀಯ ರಾಗಾಧಾರಿತ ಚಿತ್ರಗೀತೆಗಳನ್ನು ಹಾಡುವುದರಲ್ಲಿ ಜನಪ್ರಿಯರಾದ ಮನ್ನಾಡೆಯವರು ಹಾಡಿದ ಗೀತೆಯಿದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: