ಹೊಸ ಕಾಗದಕೆ ಗೀಚಿಸಿಕೊಳುವ ತವಕ

ಎಂ ಜವರಾಜ್

ಇದ್ದಕ್ಕಿದ್ದ ಹಾಗೆ
ಕೆಂಡದಂತಾದ ಕವಿತೆ,
ಇದುವರೆಗೂ ಬರೆದ ಹಾಗೆ
ಬರೆಯಬೇಡ
ಎನ್ನಲು ಕಾರಣವಿದೆ.

ಹೊಸ ಕಾಗದದ ಮೇಲೆ
ಬಹು ಬೇಗ
ಅಕ್ಷರ ಮೂಡಿಸುವುದು
ತುಸು ಕಷ್ಟ
ಅಂತ ಗೊತ್ತು ಮಾರಾಯ.

ಶಾಯಿ ಕಕ್ಕುತಿದೆ
ಮುಳ್ಳಿನ ಮೊನೆಯಿಂದ
ಗೀಚುವ ಪೆನ್ನು
ಹೊಸದಲ್ಲವೇ ಮಾರಾಯ
ಎಷ್ಟಿದ್ದರೇನು ಶಾಯಿ
ನೀಟಾಗಿ ಬರೆಯದ ಮೇಲೆ.

ಒಮ್ಮೆಲೆ
ಕೆಂಡದಂತೆ ಸುಡುತ್ತಿದ್ದ ಕವಿತೆ
ತುಸು ತಂಪಾದ ಹಾಗೆ,

ಹೊಸ ಕಾಗದಕೆ
ಗೀಚಿಸಿಕೊಳುವ ತವಕ.

ಮೂಡುವ ಅಕ್ಷರಗಳಿಗೂ ಅಷ್ಟೇ
ಬರೆವ ಪೆನ್ನಿಗೂ ಅಷ್ಟೇ
ಓದುವ ಮನಸಿಗೂ ಅಷ್ಟೇ..

ತವಕ!

‍ಲೇಖಕರು Admin

July 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಆರನಕಟ್ಟೆ ರಂಗನಾಥ

    ಸರಳವೂ ಸಾವಧಾನವೂ ಮೈವೆತ್ತ ಕವಿತೆ ಮಾತಿನಲ್ಲೂ ನಿಧಾನಿಸಿದೆ. ಈ ಹೊತ್ತಿನ ಕಾವ್ಯದ ಹಾದಿಯಲ್ಲಿ ಹೀಗೆ ಬರೆಯುವ ಕಾವ್ಯದ ಜೊತೆಗೆ ನಡೆವವರ ಹೆಜ್ಜೆಗಳು ದಣಿವಿಲ್ಲದವು. ಮಹತ್ವಾಕಾಂಕ್ಷೆಯಲ್ಲದ ಕವಿತೆಗಾಗಿ ಅಭಿನಂದನೆಗಳು ಜಯರಾಜು ಅವರಿಗೆ

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಆರನಕಟ್ಟೆ ರಂಗನಾಥCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: