ಜೋಗಿ
ಯೋಗರಾಜ್ ಭಟ್ರೇ..
ಯಾಕಿಂಥ ಕೆಲಸ ಮಾಡ್ತೀರಿ. ಸರ್ಕಾರ ಏನು ಬೇಕಾದರೂ ಮಾಡಬಹುದು. ಪ್ರಶ್ನೆ ಪತ್ರಿಕೆ ಲೀಕ್ ಮಾಡಬಹುದು. ವಿದ್ಯಾರ್ಥಿಗಳಿಗೆ ಹಿಂಸೆ ಕೊಡಬಹುದು. ಪ್ರಜೆಗಳನ್ನು ತನ್ನಿಚ್ಛೆಯಂತೆ ನಡೆಸಿಕೊಳ್ಳಬಹುದು.
ಆದರೆ, ನೀವು ಹೀಗೆಲ್ಲ ಪದ್ಯ ಬರೆದು ಅವರನ್ನು ತೇಜೋವಧೆ ಮಾಡೋದಾ?
ಇವರೆಲ್ಲ ಮಾನ ಮರ್ಯಾದೆ ಇರೋ ಜನ ಸಾರ್. ಅವರನ್ನು ಹೊಗಳಿ, ಕೊಂಡಾಡಿ ಒಂದು ಪದ್ಯ ಬರೀರಿ ನೋಡುವಾ? ಕಾಂಗ್ರೆಸ್ ಗೀತೆ ಬರೀರಿ ಸಾರ್. ಇಲ್ಲದೇ ಹೋದರೆ ನಿಮ್ಮನ್ನು ಬ್ಲಾಕ್ ಮಾಡ್ತಾರೆ. ಅದು ಬ್ಲಾಕ್ ಕಾಂಗ್ರೆಸ್ ಸಮಿತಿ ಸಾರ್.
ನಿಮ್ಮ ನ್ನು ಬಂಧಿಸೋದಕ್ಕೆ ಬೇರೆ ಫರ್ಮಾನು ನೀಡಲಾಗಿದೆ. ದನ ಕಾಯೋರು ಎಲ್ಲಿದ್ದಾರೆ ಅಂತ ಹುಡುಕ್ತಿದ್ರಲ್ಲ, ಇಲ್ಲೇ ಇದಾರೆ ನೋಡಿ
ಹಾಯ್! ಭಟ್ಟರೇ ಮತ್ತು ದುನಿಯಾ ವಿಜಿಯವರೇ!!, ವಿದ್ಯಾರ್ಥಿಗಳ ಮೇಲಿನ ನಿಮ್ಮ ಕಳಕಳಿ, ಸ್ಪಂದನಶೀಲತೆಗೆ ಹ್ಯಾಟ್ಸ್ ಆಫ್!!!, “ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ”-ಬ್ಲಾಕ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.