ರೇಖಾ ಭಟ್ ಕವಿತೆ- ಎರಡು ದಿನ ಸಾಕೇ..?

ರೇಖಾ ಭಟ್

ಒಂದು ವಾರ ರಜೆ
ಹಗುರಾಗಲೆಂದು
ತವರಿಗೆ ಹೊರಟ
ಎರಡನೆಯ ದಿನವೇ
ಮಾತನಾಡಿತು ಮೊಬೈಲು
‘ಮನೆಗೆ ನೆಂಟರ ಆಗಮನ
ಇವತ್ತೇ ವಾಪಸಾದರೆ ಚೊಲೊ ಇತ್ತು’

ಬ್ಯಾಗ್ ನಲ್ಲಿ ಹುದುಗಿದ್ದ ಬಟ್ಟೆಗಳು
ಇನ್ನೂ ತವರಿನ ನೀರಲ್ಲಿ ನೆಂದಿಲ್ಲ
ಮಗಳ ಗೊಂಬೆ ಚಪ್ಪಲಿಗಳನ್ನು
ತೋಟ ಗದ್ದೆಯ ಮಣ್ಣು ಮುದ್ದಿಸಿಲ್ಲ

ಆಯಿ ಕಡುಬಿಗೆಂದು
ಕೊಯ್ದಿಟ್ಟ ಹಲಸಿಕಾಯಿಯ
ಕಂಪು  ಮನೆತುಂಬಿಲ್ಲ
ಮುಂದಿನ ಮನೆ ಹಿರಿಯಬ್ಬೆಯ
ಕಷಾಯ ಸವಿದು
ರೆಸೆಪಿ ತಲೆಗಿಳಿಸಿಬರುವ
ಯೋಜನೆಗೆ ಸದ್ಯ ಆಯವೇ ಇಲ್ಲ

ಆಚೆಮನೆ ಕೊಟ್ಟಿಗೆಯ ಕರುವಿಗೆ
ಹಳ್ಳದ ಬದಿಯ ಹುಳಿಮಾವಿಗೆ
ಈ ಗೆಜ್ಜೆ ಸಪ್ಪಳ ಕೇಳಿಸಿಲ್ಲ
ಗುಡ್ಡದ ಹನುಮನ ಗುಡಿಯೊಳಗೂ
ಪಕ್ಕದ ದೊಡ್ಡ ಬಂಡೆಯ ಮೇಲೂ
ನಮ್ಮ ಹಾಜರಿ ದಾಖಲೇ ಆಗಿಲ್ಲ

ನಾಡಿದ್ದು ಅರಳಲು ತಯಾರಿ
ನಡೆಸುತ್ತಿರುವ ಮಲ್ಲಿಗೆಯ
ಇಂದೇ ಮುಡಿಯುವುದು ಹೇಗೆ
ಪಾದ ಊರಿದಲ್ಲೆಲ್ಲ ಪುಟಿದೇಳುವ
ತವರ ಮಿಡಿತಗಳಿಗೆ
ಬರೀ ಎರಡು ದಿನ- ಸಾಕೇ?

‍ಲೇಖಕರು nalike

August 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Arpitha Kabbinale

    ತುಂಬಾ ಸೊಗಸಾಗಿ, ಸರಳವಾಗಿ ಭಾವನೆಗಳು ವ್ಯಕ್ತವಾಗಿವೆ. ಇಷ್ಟ ಆಯ್ತು

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Arpitha KabbinaleCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: