ರೋಸಿ ಡಿಸೋಜ
(ಮಾರ್ಕ್ವೆಜ಼್ ನ ‘Of Love and other Demons’ ಓದುವಾಗ ಬರೆದದ್ದು)
ದೆಲೌರಾನ ಕನಸು
ಮಂಜು ಮುಸುಕಿದ ಬಯಲು,
ವಿಸ್ತಾರಕ್ಕೆ
ಗಾಜು ಕಿಟಕಿಯ ತಿಟ್ಟು,
ಸಿಯಾರ್ವ ಮಾರಿಯಾ
ಉಡಿಯ ತುಂಬಾ
ಎಂದೂ ಖಾಲಿಯಾಗದ ದ್ರಾಕ್ಷಿ ಗೊಂಚಲು.
ತಣ್ಣನೆ ಬೆರಳುಗಳಿಂದ
ಮಿಡಿಯುತ್ತಾ
ಕಿತ್ತು ಬಾಯಿಗಿಟ್ಟಂತೆಲ್ಲಾ
ಅದೇ ತೊಟ್ಟಿನಲ್ಲಿ ಮತ್ತೆ
ಇನ್ನೊಂದು ಹಣ್ಣು.
ಧಾವಂತವಿಲ್ಲ ಸಿಯಾರ್ವ ಮಾರಿಯಾ
ದ್ರಾಕ್ಷಿ ಗೊಂಚಲಿನ ಕೊನೆಯ ಹಣ್ಣಿನಲ್ಲಿ
ಇರುವುದು
ಸಾವು.
ಧಾವಂತವಿಲ್ಲ ಸಿಯಾರ್ವ ಮಾರಿಯಾ
ದ್ರಾಕ್ಷಿ ಗೊಂಚಲಿನ ಕೊನೆಯ ಹಣ್ಣಿನಲ್ಲಿ
ಇರುವುದು
ಸಾವು.
Wonderful!
ಕವಿ ಹೃದಯದ ಕಾದಂಬರಿಕಾರನಿಗೆ ಕಾವ್ಯ ಸ್ಪಂದನ.
uttama kavite..