ಇಳೆಗೆ ಬಂದಿಳಿದ ಓ ಚೈತ್ರವೇ ಬಾ ಒಳಗೆ, ಬೇವಿನಲಿ ಒಂದಿಷ್ಟು ಬೆಲ್ಲ ಕಲಸು..

su ram ekkundi

ಸು ರಂ ಎಕ್ಕುಂಡಿ

‘ಒಳಗೆ ಬಾ ಚೈತ್ರ!’ ಕವಿತೆಯ ಆಯ್ದ ಭಾಗ 

 

ಕರಗವನು ಹೊತ್ತಂತೆ ಹೊತ್ತಿದೆ ವಸಂತವಿದು
ಚಿಗುರಿನಾಸೆಯ ಜೀವ ಜಡಗಳಲ್ಲಿ
tree songರಸಯಾತ್ರೆ ಕೈಗೊಂಡು ದಣಿದಂಥ ದುಂಬಿಗಳು
ಕುಡಿದಿಹವು ಪುಷ್ಪರಸ ಕೊಡಗಳಲ್ಲಿ
ಪರಿಮಳದ ಪಲ್ಲಕ್ಕಿಯಲ್ಲಿ ಚೈತ್ರ ಬಂದಿರಲು
ಮನದ ಮಾಮರದಲ್ಲಿ ಸುರಿದ ಹೂವು
ನಾಗಸ್ವರವ ನುಡಿಸಿ ತಂಬೆಲರು ಸಾಗಿರಲು
ಇನ್ನೆಲ್ಲಿ ಉಳಿಯುವುದು ಹಳೆಯ ನೋವು

ಪಾಲ್ಗುಣದ ಉರಿಯಲ್ಲಿ ಕಹಿಕಷ್ಟಗಳು ಬೂದಿ
ಕಾಡಿನಲಿ ಕಣಿವೆಯಲಿ ಏನು ಹರ್ಷ
ವಸಂತವು ಕಾಲಿಡಲು ಹೂವುಗಳು ಹಾಡುಗಳು
ಕಾಯಲಿಲ್ಲವೇ ಇದಕೆ ಒಂದು ವರ್ಷ ?

ಇಳೆಗೆ ಬಂದಿಳಿದ ಓ ಚೈತ್ರವೇ  ಬಾ ಒಳಗೆ
ಬೇವಿನಲಿ ಒಂದಿಷ್ಟು ಬೆಲ್ಲ ಕಲಸು
ರೇಶಿಮೆಯ ರೆಕ್ಕೆಗಳ ಬಿಡಿಸಿದಾ ಪತಂಗವೇ
ಎಲ್ಲಿಹುದು ನಾವೆಲ್ಲಾ ಕಂಡ ಕನಸು

ಎಲೆಯ ಮರೆಯಲ್ಲಿ ಕುಹೂ ಕುಹೂ ನೀಲ ಬೆಟ್ಟಗಳು
ಹೂಬಿಸಿಲ ಕಾಸುತಿವೆ ಕಣಿವೆ ಹಾಡು
ಹುಲ್ಲಿನಲಿ ಬೆಟ್ಟದಲಿ ಹೊಸತನವ ನೀಡಿರುವ
ಚಿತ್ರವೇ ನಮಗಿಷ್ಟು ಸುಖವ ನೀಡು

‍ಲೇಖಕರು admin

April 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭಾ ಬಿ.

    ಸು ರಂ ರವರ ಮಾಗಿದ ಅನುಭವ, ರಸಪೂರ್ಣ ಬಣ್ಣನೆ, ಶಬ್ದಗಳಲ್ಲಿ ಚಿತ್ರಿಸಿದ ವರ್ಣರಂಜಿತ ವಸಂತಕಾವ್ಯಕ್ಕೆ ಇದೋ ನಮ್ಮ ನಮನ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಚಂದ್ರಪ್ರಭಾ ಬಿ.Cancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: