ಹೀಗೆ ನೆನಪಾಗುವರು…

ಡಾ ಚಿದಾನಂದ ಕಮ್ಮಾರ

ಈ ಜೀವಂತ ನೆಲದ ಮೇಲೆ
ನಾಕು ದಿನದ ಬದುಕು ಬಾಳಿ
ಇತಿಹಾಸದ ಪುಟಗಳಲಿ
ಹೂತು ಹೋದವರು

ಭವಿಷ್ಯತ್ತಿಗಾಗಿ ವರ್ತಮಾನದ ಬವಣೆಯಲಿ
ಬೆಂದೂ ಬಿಸಿಯುಸಿರಗೈಯದವರು
ಮುಳುಗದ ಸೂರ್ಯನ ಕಡುಬಿಸಿಲಿಗೆ ಮೈಯೊಡ್ಡಿ
ತಂಗಾಳಿಯ ಹಿತವನೆಮಗೆ ತೂರಿಬಿಟ್ಟವರು

ಸ್ಬಾತಂತ್ರ್ಯದ ಸೌಭಾಗ್ಯಕ್ಕಾಗಿ
ಹಣೆ ಉಳಿಸಿಕೊಂಡು ಬರಹ ಅಳಿಸಿಕೊಂಡವರು
ಸ್ವರಾಜ್ಯ ಕಲ್ಪನೆಯ ಸುಖವನುಂಡು ಡೇಗಿದವರು
ಭವಿಷ್ಯತ್ತಿನ ಕನಸ ಕೊಂಡು ವರ್ತಮಾನದ
ಬದುಕ ಕಳೆದುಕೊಂಡವರು

ರಕ್ತ, ಮಾಂಸ, ಮೂಳೆಗಳ ಚರಕದಲಿ
ವಿಶ್ವಾಸದ ನೂಲ ನೂತು
ಬದುಕ ಬಟ್ಟೆಯೆಮಗೆ ತೊಡಿಸಿದವರು
ಪಾರತಂತ್ರ್ಯವ ಪಾತಾಳಕ್ಕಿಳಿಸಿ
ದಾಸ್ಯವನು ಕೊಂದ ನಿರ್ದೋಷಿಗಳು

ಸ್ವಾತಂತ್ರ್ಯವ ಸೂರೆ ಮಾಡಿ
ಸಮಾಧಿಯಾದವರು
ಸತ್ಯ, ಅಹಿಂಸೆ, ನ್ಯಾಯ, ನೀತಿಗಳೊಂದಿಗೆ
ಮರೆತು ಹೋಗುವವರು;
ಆಗೊಮ್ಮೆ, ಈಗೊಮ್ಮೆ ಹೀಗೆ
ನೆನಪಾಗುವವರು…

‍ಲೇಖಕರು Admin

October 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: