ಸೂರ್ಯಕೀರ್ತಿಯ ‘ಮೀನು..’

ಕಡಲು ಸೂರ್ಯನಿಗೆ ಮುತ್ತಿಟ್ಟಿತು..

ಜಿ ಎನ್ ಮೋಹನ್

ಕೃತಿಯ ಬೆನ್ನುಡಿಯಿಂದ

‘ಮೀನು ಕುಡಿದ ಕಡಲು’ ಓದಿದಾಗಲಿಂದ ನನ್ನೊಳಗೊಂದು ಅಲೆ ಎದ್ದಿದೆ. ಅವು ಥೇಟ್ ಕಡಲ ಅಲೆಗಳಂತೆಯೇ ನನ್ನೊಳಗನ್ನು ಆವರಿಸಿ ಭೋರ್ಗರೆಯುತ್ತಿದೆ. ಸೂರ್ಯಕೀರ್ತಿ ಕವಿತೆಯೊಳಗಿನ ಅಲೆಗಳು ಇವು. ಚಂದ್ರನನ್ನು ಕಂಡಾಗ ಮಾತ್ರ ಅಲೆಗಳು ಉಬ್ಬರವೇಳುತ್ತವೆ ಎಂದು ಗೊತ್ತಿತ್ತು. ಆದರೆ ಈ ಸೂರ್ಯನಿಗೂ ಕವಿತೆಯ ಅಲೆಗಳು ಮುತ್ತಿಕ್ಕಿವೆ.

ಸೂರ್ಯಕೀರ್ತಿಯ ಇಡೀ ಕವಿತೆಗಳನ್ನು ಅಂಗೈನಲ್ಲಿಟ್ಟುಕೊಂಡು ಒಟ್ಟಿಗೆ ಓದುವ ಸುಖವೇ ಬೇರೆ. ಕವಿತೆಯ ಉಸಿರು ಬತ್ತಿ ಹೋಗುತ್ತಿದೆ ಎನ್ನುವ ತಳಮಳವನ್ನು ಕನ್ನಡ ಸಾಹಿತ್ಯ ಲೋಕ ಅನುಭವಿಸುತ್ತಿರುವಾಗ ಸೂರ್ಯಕೀರ್ತಿ ಕವಿತೆಗಳು ಹೊಸತನವನ್ನು ಹೊತ್ತು ಬಂದಿವೆ.

‘ಗೌರಿ ಉತ್ತ ನೆಲ’ ಹೇಗೆ ನಮ್ಮೊಳಗೇ ಒಂದು ಹೊಸಗಣ್ಣನ್ನು ಕೂಡಿಸುತ್ತದೆಯೋ ಹಾಗೆಯೇ ‘ವೈನ್ ಕವಿತೆಗಳು’ ಕೂಡಾ.. ‘ತೊಗರಿ ಹೊಲದಲ್ಲಿ ಮೂಳೆಗಳು’ ಹೇಗೋ ಹಾಗೆಯೇ ‘ಸಾಕಿಗೆ ಬರೆದ ಪ್ರೇಮ ಗೀತೆಗಳು’ ನಮ್ಮೊಳಗಾಡುತ್ತವೆ. ಪ್ರತೀ ಕವಿತೆಯಲ್ಲೂ ತನ್ನತನವೊಂದನ್ನು ಉಳಿಸುವ ಸೂರ್ಯನ ಕವಿತೆಗಳಿಗೆ ಕಡಲಿನಷ್ಟೇ ಅಗಾಧ ಪ್ರೀತಿ ಸಿಗಲಿ.

‍ಲೇಖಕರು Admin

August 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಅವರ ಈ ಕೃತಿಗೆ ಅಲ್ಲಮ ಪ್ರಕಾಶನದ ಕಾವ್ಯ ಪ್ರಶಸ್ತಿ ದೊರಕಿದೆ ಇಂದಿನ ಸಮಾರಂಭದಲ್ಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: