ಸಿದ್ದು ಸತ್ಯಣ್ಣವರ ಕವಿತೆ- ಪೆನ್ನು-ಹಾಳೆಯ ಎರಡು ಜಗಳ…

ಸಿದ್ದು ಸತ್ಯಣ್ಣವರ

ಜಗಳ 1

ಕಾಗದ ಪೆನ್ನಿಗೆ ಒಣಜಗಳ
ಬಾಯಿಗೆ ಬಾಯಿ
ಗುದ್ದಾಡಿಕೊಂಡು
‘ಸಾಯಿ’ ಪರಸ್ಪರ ಬೈದುಕೊಂಡವು

ಪೆನ್ನು ಜೋರಾಗಿ ಚುಚ್ಚಲು
ಮುಂದಾಯಿತು
ಹಾಳೆ ಮೈಯುಬ್ಬಿಸಿತು

ಪೆನ್ನಿನ ನಿಬ್ಬು ತುಂಡಾದರೆ
ಹಾಳೆಯ ಹಗುರ ಕಳೇಬರ ಹಾರಾಡಿತು

ಪೆನ್ನಿಂದ ರಕ್ತ ಸೋರಿತು
ಕಪ್ಪಗೆ
ಚೀರಿತದು,
ರಕ್ತವನ್ನು ಬರೀ ಕೆಂಪು ಎಂದದ್ದ ನೆನಸಿಕೊಂಡು

ಹಾಳೆಯ ಕಳೇಬರ ಕೊಳೆತು ದುರ್ನಾತದೊಡಗೂಡಿ ಮಿಳಿತು ಹಳದಿಯಾಗಿದ್ದವು
ಎಲ್ಲಿದೆ ಸಬೂಬು?
ಹಾಳೆಗಳೆಲ್ಲ ಬರೀ ಬಿಳಿಯಾಗಿರಲೆಂಬುದಕ್ಕೆ?
ಹಾಳೆಗಿನ್ನೂ ದಕ್ಕದ ಸತ್ತ ಅನುಭವ

ಮುರಿದು ಬಿದ್ದ ನಿಶಕ್ತ ನಿಬ್ಬು
ತುಂಡು ತುಂಡಾದ ಹಳದಿ ಹಾಳೆಗಳ ಕಂಡು
ನಕ್ಕೆಂದಿತು ‘ನೀ ಸತ್ತೆ’

ಹಾಳೆ ತಾ ಸತ್ತರೂ
ಮತ್ತೊಂದು ಬಿಳಿ ಕಟ್ಟ ತೋರಿಸಿ ಹೆದರಿಕೆಯಲೇ ನಗಲು ತಯಾರಾಗತೊಡಗಿತು

ಜಗಳ 2

‘ದಪ್ಪ ಬರೆಯುತ್ತಿ’
ಹಾಳೆಯ ಜಗಳ
ನಾನಿರುವುದೇ ಹಾಗೇ ಪೆನ್ನಿನ ಸಬೂಬು

ಪೆನ್ನ ಅಂಚು ಬದಲಾಗಲಿಲ್ಲ
ಮುನಿಸು ;
ಎರಡೂ ಕೂಡಲಿಲ್ಲ
ಆ ಮನೆಯಲ್ಲಿ

ಎಷ್ಟು ಆಲೋಚನೆಗಳ,
ಅದೆಷ್ಟು ಲಕ್ಷ ಅಕ್ಷರಗಳ
ಭ್ರೂಣ ಹತ್ಯೆಯಾಗಿರಬಹುದು
ಪ್ರತಿದಿನ ?

ಯಾವನೋ ಎಲ್ಲೊ ಯೋಚಿಸುವಾಗಲೂ ಈ ಜಗಳ
ಬಗೆಹರಿದಿರಲಿಲ್ಲ

‍ಲೇಖಕರು Admin

November 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: