ಸವಿತಾ ನಾಗಭೂಷಣ ಹೊಸ ಕವಿತೆ- ಕೊನೆಯ ತುತ್ತು

ಸವಿತಾ ನಾಗಭೂಷಣ

—————

ಅದು ಅವರೆಲ್ಲರ ಕೊನೆಯ 

ಊಟವಾಗಿತ್ತು?

ಶಕ್ತಿವಂತರ ಯುಕ್ತಿವಂತರ

ಉಕ್ತಿವಂತರ ಕೊನೆಯ ಊಟವಾಗಿತ್ತು…

ಜಗತ್ತಿನ ಎಲ್ಲಾ ಶಸ್ತ್ರಾಗಾರಗಳು

ಪೂರಾ ಬರಿದಾಗಿದ್ದವು

ಕಟ್ಟಕಡೆಯ ಅಸ್ತ್ರವನ್ನೂ ಹೂಡಿಯಾಗಿತ್ತು…

ಮುಂದೆ?

ಒಂದು ಯುದ್ಧ ವಿಮಾನವೂ

ಹಾರಲಿಲ್ಲ

ಒಂದು ಟ್ಯಾಂಕರೂ ಓಡಲಿಲ್ಲ

ಒಂದು ಸಮರ ನೌಕೆಯೂ

ಚಲಿಸಲಿಲ್ಲ

ಒಬ್ಬ ಯೋಧ ಕೂಡ ಕಾಣಲಿಲ್ಲ

ಎಲ್ಲ ಯುದ್ಧ ಯಂತ್ರ, ತಂತ್ರ

ಮಂತ್ರಗಳು ದಿಕ್ಕೆಟ್ಟು ಕೂತಿದ್ದವು

ಅದವರ ಕೊನೆಯ ತುತ್ತು

ಶಾಂತವಾಯಿತು ಜಗತ್ತು

ಮುಂದೆ?

ಮಕ್ಕಳು ಬಿತ್ತಿ ಬೆಳೆದರು

ತಾಯಂದಿರು ಅಡಿಗೆ ಮಾಡಿದರು

—————

‍ಲೇಖಕರು avadhi

November 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: