ಸರೋಜಿನಿ ಪಡಸಲಗಿ ಅನುವಾದಿತ ಕವಿತೆ- ಭೀತಿ…

ಮೂಲ : ಗಿಬ್ರಾನ್ 
ಕನ್ನಡಕ್ಕೆ: ಸರೋಜಿನಿ ಪಡಸಲಗಿ

ಅರಿಯದ ಕಡಲ ಸೇರುವ ಮುನ್ನ ಹರಿದು ಬಂದ ನದಿಗೂ ಭೀತಿಯ ನಡುಕ
ಸಾಗಿ ಬಂದ ದಾರಿಯುದ್ದಕ್ಕೂ ದಾಟಿ ಬಂದಿದ್ದರೂ
ಗಿರಿಯ ಕಡಿದಾದ ತುದಿಯಿಂದ
ಕೊರಕಲು – ತಿರುವು – ಹಳ್ಳ- ತಿಟ್ಟುಗಳಗುಂಟ
ಜೊತೆಗೇ ಸಮತಟ್ಟು ಬಯಲು ಜನಸಂದಣಿಯ ನಡುವಿಂದ
ಸಾಗಿ ಬಂದ ಹಾದಿ ಅದು ಬಲ್ಲದದನ
ಈಗ ಇದಿರಿಗುಂಟು ಅರಿಯದ ವಿಶಾಲ ಸಾಗರ
ಒಳಹೊಗಲೇ ಬೇಕಾದ ನೀಲ ನೀರ ಹರವು

ಈ ಕಡಲಲ್ಲಿ ಸೇರಿ ಕರಗಿ ಹೋದರೆ ಮತ್ತೆಲ್ಲಿ ಉಂಟು ಉಳಿವು
ಎಂದೆಂದಿಗೂ ಮಾಯ ಮರೆತು ಹೋದ ಇರುವು
ಆದರೆ ಹೋಗಲುಂಟೇ ಮರಳಿ ಬಂದ ದಾರಿಯಲಿ
ಕಾಲನ ಪಥದಲ್ಲಿ ಸಾಗಿ ಬಂದು ಕಡಲಿನ ಬಯಲಿನಂಚಿನಲ್ಲಿ ಬಂದು ನಿಂತ ಜೀವದಂತೆ
ಬಲು ಅಸಹಾಯಕ ಅದೂ
ಬೇಕೋ ಬೇಡವೋ ಒಂದಾಗಲೇ ಬೇಕು ಕಡಲ ಒಡಲಲ್ಲಿ
ಆವಾಗಲೇ ಅನುಭವಿಸೀತು ಭೀತಿ ದೂರಾಗಿ ಅದೇನೋ ಆನಂದವ
ತಿಳಿದೀತು ನನ್ನ ಅಸ್ತಿತ್ವ ಅಳಿದಿಲ್ಲ ಬೆಳೆದೆ ನಾ ಎಂದು
ನಾನೀಗ ಕಡಲೊಡನೆ ಸೇರಿ ಕಡಲಾದೆ
ಈ ಬಲು ವಿಸ್ತಾರದ ನೀಲ ಬಯಲಲ್ಲಿ ಬಯಲಾದೆ ಎಂದು ||

‍ಲೇಖಕರು Admin

October 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: