ಸತ್ಯಪ್ರಕಾಶ್ ಎಂ ಆರ್ ಕವಿತೆ- ತೆರೆದ ಬಾಗಿಲು…

ಸತ್ಯಪ್ರಕಾಶ್ ಎಂ ಆರ್

ಅಂಗಾತ ಮಲಗಿ ಛಾವಣಿ ನೋಡುವಾಗ
ಮುಚ್ಚಿದ ಬಾಗಿಲು ತೆರೆಯಲೇ ಇಲ್ಲ
ಗೋಡೆಗಳಿರುವುದು ಮರೆತೇ ಹೋಗಿತ್ತು
ನಿರ್ವಾತದಲಿ ಮಾಡಿದ ಚೌಕವಿದು
ನನ್ನ ಕೊಠಡಿಯೆನಿಸಲೇ ಇಲ್ಲ
ತೆರೆದ ಕಿಟಕಿಯಾಚೆ ಅಕಾಲಿಕ ಮಳೆ,
ಇಂದೇಕೋ ಶರತ್ಕಾಲದ ಶೀತಲ ಗಾಳಿ ಮೈಸೋಕಲಿಲ್ಲ
ಶುಭ್ರ ಆಕಾಶದಿಂದ ಆಯತಪ್ಪಿ ಬಿದ್ದ
ಹೊಳೆವ ಚುಕ್ಕಿಗಳು ಯಾವ ಸಾಗರದ
ಗರ್ಭ‌ ಸೇರಿತೋ ಏನೋ
ಜ್ವಾಲಾಮುಖಿಯಿಂದ ಪುಟಿವ ಬೆಂಕಿ
ಶಾಂತ ಸಾಗರವನು ಕದಡಲೇ ಇಲ್ಲ
ಬಿಸಿ ಹಾಸಿಗೆಯ ಮೇಲೆ ಮಲಗಿರುವ ದೇಹ
ಒಮ್ಮೆಲೇ ಆಕಾಶಕ್ಕೆ ಜಿಗಿದು
ನೆಲದ ಒಡಲೊಳಗೆ ಇಳಿದು‌
ಸಾಗರದ ಗಾಢ ಅಂಧಕಾರದಲಿ
ಗಿರಕಿ ಹೊಡೆವ ಮಾಯೆಗೆ
ಅರ್ಥ ಹುಡುಕುವ ಇರಾದೆ ಇಲ್ಲ!

ಮೈಮನಸನು ತಣಿಸುವ ಎಲ್ಲ‌‌‌‌ ಸುಖ
ಕ್ಷಣಾರ್ಧದಲಿ ಕರಗಿ‌ ಹೋಗುವುದು
ಅರಿವಿಗೆ ನಿಲುಕುವುದೇ ಇಲ್ಲ
ನಡುರಾತ್ರಿಯಲಿ ಅತೃಪ್ತ ಮನಸುಗಳು
ಕಣ್ಣೀರು ಹಾಕುವುದು ತಪ್ಪುವುದಿಲ್ಲ
ಮತ್ತೆ ಬೆಳಕಾದರೂ ಹೊಳೆವ ಕಣ್ಣುಗಳ ಕೆಳಗೆ
ರಾತ್ರಿಯ ಕತ್ತಲು ಸರಿಯುವುದೇ ಇಲ್ಲ!
ಕತ್ತಲು ಬೆಳಕಿಗೆ ಇಲ್ಲಿ ಅಂತರವಿಲ್ಲ
ಘಾಸಿಗೊಂಡ ಹೃದಯದಲಿ‌
ಎಂದೂ ಶೂನ್ಯ ಆವರಿಸುವುದಿಲ್ಲ!
ತೆರೆದ ಗಾಯದ‌‌ ಬಾಗಿಲಿನಿಂದಲೇ
ಬೆಳಕು ಮೂಡುವುದು,
ಮುಚ್ಚಿದ ಬಾಗಿಲಿನಿಂದಲ್ಲ!

‍ಲೇಖಕರು Admin

November 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vidya N.R

    Hello, im very happy to be the part of avadhi blog…till now m following your blog in many social media platforms now i want to join your team as a regular reader through subscription..thank you..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: