ಪ್ರಸಾದ್ ರಕ್ಷಿದಿ
ಕೆಲವು ದಿನಗಳ ಹಿಂದೆ ಕಾಫಿ ವಲಯದ ಒಂದು ಶತಮಾನದ ಸಾಂಸ್ಕೃತಿಕ ಸಂಕಥನವನ್ನು ನಿರೂಪಿಸುವ ಪ್ರಯತ್ನ ಮಾಡಿದ್ದೆ. ‘ಕಳೆದ ಹೋದ ದಿನಗಳು’ಎನ್ನುವ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಈ ಸರಣಿ ನಂತರ ನಾನು ಗೌರಿ. ಕಾಮ್ ನಲ್ಲಿಯೂ ಬಂದಿತ್ತು. ಈ ಸರಣಿಗೆ ಬಂದ ಪ್ರತಿಕ್ರಿಯೆಗಳು. ಅಭಿಪ್ರಾಯಗಳು ನೂರಾರು..
ಈ ಸರಣಿಯ ಮೂಲಕವೇ ನನಗೆ ಪರಿಚಯ ಮತ್ತು ಸಂಪರ್ಕಕ್ಕೆ ಬಂದವರು. ಕನ್ನಡದ ಹೆಸರಾಂತ ಬರಹಗಾರ ಎ.ಆರ್. ಮಣಿಕಾಂತ್. ಅವರಿಗೆ ಸಕಲೇಶಪುರದ ಬಗ್ಗೆ ವಿಶೇಷ ಪ್ರೀತಿ ಮತ್ತು ಒಡನಾಟಗಳಿವೆ ಎಂದು ತಿಳಿದದ್ದು ಆ ಮೂಲಕವೇ.
ನನ್ನ ಬರಹಗಳಲ್ಲಿ ಸಾಂದರ್ಭಿಕವಾಗಿ ಸಕಲೇಶಪುರದ ಗಣಪಯ್ಯ ಸ್ಮಾರಕ ವಿಶೇಷ ಚೇತನ ಮಕ್ಕಳ ಶಾಲೆಯ ಬಗ್ಗೆ ಬರೆದಿದ್ದೆ. ಆ ಶಾಲೆಯ ಮಕ್ಕಳ ಬಗ್ಗೆ ಕಾಳಜಿಯಿಂದ ಎ.ಆರ್.ಮಣಿಕಾಂತ್ ಅವರು ತಮ್ಮ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಕೃತಿಯ ಒಂದು ನೂರು ಪ್ರತಿಯನ್ನು ಎಲ್ಲ ಮಕ್ಕಳಿಗೂ ತಲುಪುವಂತೆ ಕಳುಹಿಸಿಕೊಟ್ಟರು.
ಇಂದು ಪುಸ್ತಕಗಳನ್ನು ಎಲ್ಲ ವಿಶೇಷ ಚೇತನ ಮಕ್ಕಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಪಾರಸ್ ಮಲ್, ರಜನೀಕಾಂತ್, ವಾಸುದೇವ ಶರ್ಮ, ಪ್ರಾಂಶುಪಾಲ ಲೋಕೇಶ್, ಶಿಕ್ಷಕರಾದ ಈಶ್ವರಪ್ಪ ಹಕಾರಿ, ವೇದಿಕೆಯಲ್ಲಿ ಇದ್ದರು. ಸುಳ್ಯದ ವೈದ್ಯ ಡಾ.ಕೃಷ್ಣ ಮೂರ್ತಿ ಪಾರೆ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮಣಿಕಾಂತ ಸರ್ ಮನಸು ದೊಡ್ಡದು. ನಮ್ಮ ಕಾಲೇಜಿಗೂ ತುಂಬಾ ಪುಸ್ತಕಗಳನ್ನು ಕಳಿಸುವುದಾಗಿ ಹೇಳಿದ್ದಾರೆ.