ವಸುಂಧರಾ ಕದಲೂರು ಕವಿತೆ- ‘ಕಾಲವಶದಲಿ ಅಬ್ದಿ….’

ವಸುಂಧರಾ ಕದಲೂರು

ಅಬ್ದಿಯುಂ ಒರ್ಮೆ ಕಾಲವಶದಿಂ
ಮರ್ಯಾದೆಯಂ ದಾಂಟದೇ

ಕಡಲು ಕದಲುವುದಿಲ್ಲ
ನಿಂತ ಆವಾರದ ಆಚೆಗೆ
ತುಳುಕದೆ ಥಳುಕು ಬದುಕಿಗೆ
ಹೊರಳದೇ.. ಬಳುಕಿ ಬಂದ
ನದಿಗಳ ಒಡಲೊಳಗೆ
ಶಾಂತಗೊಳಿಸುವ
ಕಡಲು ತನ್ನೊಡಲಲಿ ನಿತ್ಯ
ನಿರಾಳ ಮೌನದಲಿ ಧ್ಯಾನ
ಮಾಡುವಂತಿರುತ್ತದೆ.

ಕಾಲವಶದಲಿ ಅಬ್ದಿ
ಮರ್ಯಾದೆಯಂ ದಾಂಟಿ
ಮುನ್ನಡೆದರೆ….

ಕಡಲ ಮೌನ ಕದಡುವ
ಒಡಲ ಬಡಬಾನಲ
ಸುನಾಮಿ ಎಬ್ಬಿಸಿ
ಅಲೆಗಳ ಮುಗಿಲೆತ್ತರ
ಉಬ್ಬಿಸಿ ಆರ್ಭಟಿಸಿ
ಕುಣಿದು ಹುಚ್ಚೆದ್ದರೆ
ಆಗ ಕಡಲಂಚಿನಾಚೆಗೂ
ಸ್ಮಶಾನ ಮೌನ ವಿಸ್ತರಿಸುತ್ತದೆ

‍ಲೇಖಕರು avadhi

March 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: