ಬಿದಲೋಟಿ ರಂಗನಾಥ್ ಹೊಸ ಕವಿತೆ- ಒಂದಾಗದ ಚಪ್ಪಲಿಗಳು…

ಬಿದಲೋಟಿ ರಂಗನಾಥ್

ಆ ಅನಾಥೆಯ ಸವಕಲು
ಮೈಯ ದಾರಿಯ ಮೇಲೆ ಗುಂಡಿಗಳು ಬಿದ್ದಿವೆ
ಸವೆದವು ಒಂದು ಎರಡು ಮೂರುದಿನಗಳು
ಬದಲಾಗಲಿಲ್ಲ ಅವಳ ಚಲನೆ ಶಕ್ತಿ
ಒಂದಾಗಾಲಿಲ್ಲ ಚಲ್ಲಾಪಿಲ್ಲಿ ಬಿದ್ದ ಚಪ್ಪಲಿಗಳು
ನಿಡಿದಾದ ನಿಟ್ಟುಸಿರಿಡಲಿಲ್ಲ
ಬರಿದಾದ ಸಿಲ್ವಾರ ಬಟ್ಟಲು

ದೀಪಗಳು ಬೆಳಗಲಿಲ್ಲ
ನೋಡುವ ಕಣ್ಣುಗಳಲ್ಲಿ
ಚೆಲ್ಲಲಿಲ್ಲ ನಾಚಿಕೆ ಅವಳ ಮೈಯಕಚ್ಚಿದ
ಮುರಕಲು ಸೀರೆ !

ಮಳೆ ಮೋಡ ಕತ್ತಲು
ಅವಳ ನೋಡಿ ಹಿತ್ತಲ ಸೇರಿದವು
ನಾಯಿನರಿ ಹಾವು ಚೇಳು
ಕಚ್ಚದೆ ತಲೆ ಒದರಿದವು

ಕತ್ತಲು ಬರಿದಾದರು
ಬೆಳಕು ಅವಳ ಕಣ್ಣು ತುಂಬಲಿಲ್ಲ
ಆದರೂ ಅವಳು ನಡೆಯುತ್ತಲೇ ಇದ್ದಳು
ಬದುಕು ಕಾಡಿದ ಹಾದಿಯ ಮೇಲೆ.

ಸಾಂತ್ವಾನಕೆ
ನನ್ನ ಹೆಗಲ ಹಕ್ಕಿಯ ಕೈಯ ಬೆರಳು ತಾಕಿದರೂ
ಬೆಚ್ಚಿ ಬಿದ್ದ ಕಣ್ಣಲ್ಲಿ ಭಾವದ ಬೇಲಿ ತೆರುವಾಗಲಿಲ್ಲ

ನಾನು ನೋಡುತ್ತಲೇ ಇದ್ದರು
ಅವಳಿಗೆ ನಾನು ಕಾಣಲಿಲ್ಲ
ಅವಳು ನೋಡುವಾಗ
ನನ್ನ ಕಣ್ಣುಗಳಲ್ಲಿ
ಚಲನೆಯಿಲ್ಲದ ಮಂದ ಬೆಳಕು !

ಈಗ,
ಭೌತಿಕವಾಗಿ ಅವಳಿಲ್ಲ ಅಲ್ಲಿ
ಆದರೆ ನೇತು ಬಿದ್ದಿದ್ದಾಳೆ ನನ್ನ ಕಣ್ಣಲ್ಲಿ
ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಲೇ ಇದ್ದೇನೆ
ಆ ಜಾಗದ ಮೇಲೆ ಪಾದವೂರಲು
ಈಗಲೂ ಭಯ !

‍ಲೇಖಕರು Admin

November 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: