ಪದ್ಮಿನಿ ನಾಗರಾಜು ಹೊಸ ಕವಿತೆ- ಗಿರಿ ಬೆಂದು ತರುವುಳಿದು

ಡಾ.ಪದ್ಮಿನಿ ನಾಗರಾಜು

—-

ಅವಳು ಸತ್ತಿದ್ದಾಳೆ
………
ಹೌದೆ ಬದುಕಿದ್ದಳೆ?!
ಬದುಕಿದ್ದಳು ಅವಳು
ಅವರಿವರ ಬಾಯಿಗೆ ಸಿಲುಕದೆ
ಎಡಬಲಗಳ ಪಾಲಿಗೆ ನಿಲುಕದೆ
ತನ್ನ ನಾಲಿಗೆಯ ಜಡವಾಗಿಸಿ
ಬರೆದ ಸಾಲುಗಳ ಅಮರವಾಗಿಸಿ
ಇಂದು ಉಸಿರು ನಿಲ್ಲಿಸಿದ್ದಾಳೆ

ತನ್ನ ಕತೆಗಳ ನಾಯಕಿ
ತಾನೇ ಆಗಿ
ಕನಸಿನ ನಾಯಕನ
ಸೃಷ್ಟಿಸಿ
ಸುಖ ಸಂಸಾರದ
ಸೂತ್ರಗಳ ಪೋಣಿಸಿ
ಆದರ್ಶ ಕುಟುಂಬದ
ಕಾದಂಬರಿಗಳ
ಸೂತ್ರಧಾರಿಣಿಯ
ಕೊನೆಯಾತ್ರೆ ಇಂದು

ಆತ್ಮಕತೆ ಅರ್ಧಕ್ಕೆ
ನಿಂತಿದೆ
ಪೂರ್ಣಸತ್ಯವ ಗಂಟಲಲ್ಲಿ
ಗಕ್ಕನೆ ಕಟ್ಟಿಹಾಕಿ
ಹೇಳುವುದ ಹೇಳಲಾರದೆ
ಚಟ್ಟದಲ್ಲಿ ಮಲಗಿದ್ದಾಳೆ

ಬರೆಯುವುದ ಚಟವಾಗಿಸಿ
ಪ್ರಶಸ್ತಿ ಬಾರದಾಗ ದುಃಖಿಸಿ
ಬಂದಾಗ ಹಿಗ್ಗಿ
ಅವರಿವರ ಕಾಲು ಹಿಡಿದು
ದಕ್ಕಿಸಿಕೊಂಡ ಪಟ್ಟಗಳ
ಪಟ್ಟಿ ಮಾಡುತ್ತಾ
ಹೆಣವಾದ ಅವಳದ್ದೇ
ಗುಣಗಾನ

ಜನರ ಚಿತ್ತದಲಿ
ಮನೆಯವರ ಮನದಲ್ಲಿ
ಮರತೇ ಹೋಗಿದ್ದ ಅವಳು
ಹೇಳಬೇಕಾದ ಮಾತುಗಳು
ಗಂಟಲಲ್ಲೇ ಉಳಿದು
ಬರೆಯಬೇಕಾದ ಪದಗಳೆಲ್ಲಾ
ಅವಳ ಸಮಾಧಿಯ ಮೇಲಿನ
ಗಿಡಗಳಾಗಿ ಜೀವತಳೆಯಲಿವೆ

    
             

‍ಲೇಖಕರು avadhi

September 10, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: