ನೀನು…

ಮರುಳಸಿದ್ದಪ್ಪ ದೊಡ್ಡಮನಿ

ಗದಗ ಜಿಲ್ಲೆಯ ಹುಲಕೋಟಿಯವರು. ಕವಿತೆ, ಗಜಲ್, ಶಾಯಿರಿ ಮತ್ತು  ಹನಿಗವಿತೆ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಎಲ್‌ಐಸಿಯಲ್ಲಿ ಉದ್ಯೋಗಿಯಾಗಿದ್ದಾರೆ.

ಖಾಲಿ ಹೃದಯದೊಳಗೆ ಕನಸು ಬಿತ್ತಿದವಳು ನೀನು
ಬರಡು ಬಿದ್ದ ಎದೆಯೊಳಗೆ ಹಸಿರು ಬೆಳೆದವಳು ನೀನು

ನೂರು ಜಟಿಲತೆಯ ಜಾಡ್ಯವ ದಾಟಿ ಬಂದು
ಹೊಸ ಹೊಳವಿನ ಬೆಳಕು ತಂದವಳು ನೀನು

ತರು ಲತೆಗಳೆಲ್ಲ ಮುಖ ಸವರಿ ಮುದ್ದಿಸಿವೆ
ಬಾನಾಡಿಗಳ ಕಣ್ಣಂಚಲಿ ನಿನ್ನ ಬಿಂಬ ತುಂಬಿದವಳು ನೀನು

ಬರಿ ಕಗ್ಗತ್ತಲ ದಾರಿಗೆ ಕಂದಿಲ ಬೆಳಕಾಗಿರುವೆ
ತೈಲದಂತೆ ಧಹಿಸಿ ಕೊಂಡು ಧರೆಗೆ ಬೆಳಕು ಹಂಚಿದವಳು ನೀನು

ಹುಸಿ ನುಡಿವವರ ಮದ್ಯೆ ಮರುಳನ ಅಕ್ಕರೆ ಇದೆ
ಅಕ್ಕರೆಯ ಸವಿ ಮಾತಿಗೆ ಕಾದವಳು ನೀನು

‍ಲೇಖಕರು Admin

October 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: