ಖ್ಯಾತ ಸಾಹಿತಿ, ಬಂಡಾಯ ಸಾಹಿತ್ಯದ ಪ್ರಮುಖರಲ್ಲೊಬ್ಬರಾದ, ಅನೇಕ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ ಡಾ ಸಿದ್ದಲಿಂಗಯ್ಯ ಇನ್ನಿಲ್ಲ.
ಅವರು ಇಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧಾನ ಹೊಂದಿದರು.
ಅವರಿಗೆ ೬೬ ವರ್ಷ ವಯಸ್ಸಾಗಿತ್ತು.
ಕೊರೋನಾ ಕಾರಣದಿಂದಾಗಿ ಹಲವು ದಿನಗಳಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧಾನ ಹೊಂದಿದರು.
ಪ್ರಕಾಶಕರಾದ ರಾಘವೇಂದ್ರ ಅವರು ‘ಇಕ್ರಲಾ ಒದೀರ್ಲಾ ಈ ಕರೋನಾಗೆ’ ಎಂದು ಸಂತಾಪ ಸಲ್ಲಿಸಿರುವುದು ಅವರ ಕಾವ್ಯ ಹಾಗೂ ಕಳಕಳಿ ಹೇಗೆ ಸಮಾಜದ ಆಳಕ್ಕೆ ಇಳಿದಿತ್ತು ಎನ್ನುವುದರ ಸೂಚಕ.
0 ಪ್ರತಿಕ್ರಿಯೆಗಳು