ಚಂದ್ರನ ದಾರಿಯ ಮೇಲೆ ಮುಳ್ಳ ಸುರುವಿದ್ದಾರೆ..

 

 

 

 

 

ಬಿದಲೋಟಿ ರಂಗನಾಥ್

 

ನೇರ ಮಾತಿಗೆ ನೋವಿನ ಅಲೆ ತೀಡಿ
ಸೂರ್ಯನ ಕೈಗಿಟ್ಟರು
ಬೆಂದ ಮನಸ್ಸು
ಸಾಗುವ ಬದುಕಿನ ಪಯಣದಲ್ಲಿ
ಹೆಜ್ಜೆ ಗುರುತಾಯಿತು.

ಮರೆಯ ಹೊರಟರೂ ಮರೆಯಲಾಗದೆ
ಮೂಕ ಹಕ್ಕಿಯ ಜೊತೆ
ನೋವ ಸ್ಪುರಿಸಿದೆ
ಹಕ್ಕಿ ಕೊಕ್ಕ ತೀಡಿ ಕಣ್ಣೀರಾಕಿತು.

ಹೋಗುತ್ತಲೇ ಇದ್ದೇನೆ
ಸೂರ್ಯ ಜೊತೆಯಲ್ಲೇ ಬರುತ್ತಿದ್ದಾನೆ
ಚಂದ್ರನ ಆಗಮನದ ದಾರಿಯ ಮೇಲೆ
ಮುಳ್ಳ ಸುರುವಿದ್ದಾರೆ ಪಾಪಿಸ್ಟರು.

ಸಮಾಧಾನ ಮನಸ್ಸಿನ ಹಿಡಿಗನ್ನಡಿಯಾಗಲಿಲ್ಲ
ಹೆಪ್ಪುಗಟ್ಟಿದ ದುಃಖ ಕಣ್ಣೀರಾಗಿ
ಅಂಗೈ ಗುಣಿಯಲಿ ಬಿದ್ದಿದ್ದನ್ನ ಕೆದಕಿ ನೋಡಿದೆ
ಬದುಕಿನ ಹೂವೊಂದು ನಕ್ಕಂತಾಯಿತು.

ಛಲ ಚೆಲ್ಲುವ ಕನಸು
ಮನಸ ಮುನ್ನೆಡೆಸುತ್ತಲೇ ಇದೆ
ಬೆಳ್ಳಿ ಚುಕ್ಕಿಯ ನೋಡುತ
ಮನಸು ಹಗುರಾಗಿದೆ.

ಅಕ್ಕರೆಯ ನುಡಿಮುತ್ತುಗಳ
ಸಂತೈಸುವಿಕೆಗೆ
ಕೆಂಡ ಹುದುಗಿಸಿಕೊಂಡೂ
ನಗುವ ಚೆಲ್ಲುತ್ತಿದೆ
ಮನದೊಳಗಿನ ನವಿಲು.

‍ಲೇಖಕರು Admin

March 3, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: