ಕೆ ಜಿ ಎನ್ ಎಂಬ ಮಹಾಗುರು ಕನಸಿಗೆ ಬಂದು..

ಎಸ್‌ ಜಿ ಸಿದ್ದರಾಮಯ್ಯ

ಈ ಮನೆಯ ಮಾಡಿನೊಳಗೆ
ಅದೆಷ್ಟು ಮರೆವಿನ ಇರವುಗಳೋ ?!.
ಮರೆತಂತಿದ್ದವು ಇದ್ದಕ್ಕಿದ್ದೊಲೆ
ಬೆಳಕಿಂಡಿಯೊಳಗೆ ತೂರಿ
ಗುಣಿತಾತ್ಮಕ ಜಾತ್ರೆಯ ಜವಾರಿ.

ಗುರುವೇ ಗುರುಪಾದವೇ ಇಂದು ಆದದ್ದು ಅದೇ :
ಕಲ್ಲು ಕರಗುವ ಹೊತ್ತಿನಲ್ಲಿ ಸಟ್ಟನೆ ಎದುರಿಗೆ ಬಂದಿರಿ
ಬಂದವರು ಬಂದಂತೆ ಕೈಹಿಡಿದಿರಿ
ಮನೆಗೆ ಬಾ ಎಂದಿರಿ.

ಮರು ಕ್ಷಣದಲ್ಲೆ ನಿಮ್ಮ ಮನೆಯಂಗಳದಿ
ನೀವು ಅದೇ ಆಗ ಕರೆದ ಕರೇವಿನ ಗಿಣ್ಣ
ಉಣಬಡಿಸಿದ್ದು ತಾಯಿ ಅನ್ನಪೂರ್ಣ

ಎಷ್ಟು ದಶಕದ ಬರವೋ ಹಸಿವು ತಣಿದಿತ್ತು
ರಸಿಕನಾಡುವ ಮಾತು ಶಶಿಯುದಿಸಿ ಬಂದಂತೆ
ಮಾತು ಮಾತಿನ ನಡುವೆ ಕಳೆದ ಕವಿಗಳ ಬೆರಗು

ಉಂಡದ್ದು ಕಂಡದ್ದು ಕೇಳಿದ್ದು
ಸೋಹಂ ಕರಗಿದ ದಾಸೋಹಂ

ಎಲ್ಲ ಇಲ್ಲಿಗೆ ಪೂರ್ಣ ಎಂಬಲ್ಲಿಗೆ
ನೀವು ಬಯಲು ಬಯಲು ಬಯಲನು ತಬ್ಬಿ
ಮರೆವಿನ ಇರವು ಮಹಾ ಬಯಲು.

‍ಲೇಖಕರು Admin

January 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: