ಕಿರು ಪತ್ರಿಕೋದ್ಯಮಕ್ಕೆ ಚಂಪಾ ಕೊಡುಗೆ ಅಪಾರ…

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸ್ಮರಣೆ…

ಶಿವಾನಂದ ತಗಡೂರು

ಪ್ರೊಫೆಸರ್ ಚಂದ್ರಶೇಖರ ಪಾಟೀಲ ಅವರು ಚಂಪಾ ಎಂದೇ ನಾಡಿನಾದ್ಯಂತ ಗುರುತಿಸಿಕೊಂಡ ಬಂಡಾಯದ ಗಟ್ಟಿ ಧ್ವನಿಯ ಸಾಹಿತಿ.
ಕನ್ನಡದ ಅಸ್ಮಿತೆಯಾಗಿಯೂ ಗಮನ ಸೆಳೆದ ಚಂಪಾ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ, ಆ ಸಂದರ್ಭದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸರ್ಕಾರಕ್ಕೆ ಸಡ್ಡು ಹೊಡೆದ ಪರಿಷತ್ ಕನ್ನಡಿಗರ ಸ್ವಾಭಿಮಾನಿ ಸಂಸ್ಥೆ ಎನ್ನುವುದನ್ನು ಸಾರಿದ್ದನ್ನು ಯಾರೂ ಮರೆಯಲಾಗದು.

ಆರು ದಶಕಗಳಷ್ಟು ದೀರ್ಘ ಕಾಲ ಸಂಕ್ರಮಣ ಮಾಸಿಕವನ್ನು ಮುನ್ನಡೆಸುವುದರ ಮೂಲಕ ಕಿರು ಪತ್ರಿಕೆಗಳ ಪೈಕಿ ಮುಖ್ಯರಾಗಿದ್ದರು. ಆ ಮೂಲಕ ಕಿರು ಪತ್ರಿಕೋದ್ಯಮಕ್ಕೆ ಮಹತ್ವ ತಂದುಕೊಟ್ಟರು. ಭಾಷೆ, ಸೊಗಡು ಮತ್ತು ಸಾಹಿತ್ಯವನ್ನು ಒಟ್ಟಿಗೆ ಕನ್ನಡ ಮನಸುಗಳಿಗೆ ಉಣಬಡಿಸಿದ್ದು, ಕನ್ನಡಿಗರನ್ನು ಜಾಗೃತಗೊಳಿಸಿದ್ದು ಶ್ಲಾಘನೀಯ.

ಚಂಪಾ ಮತ್ತು ಅವರು ಪ್ರಕಟಿಸುತ್ತಿದ್ದ ಸಂಕ್ರಮಣ ವಿಚಾರವಾದದ ಬೆಸುಗೆಯಾಗಿತ್ತು. ಆದ್ದರಿಂದ ಚಂಪಾ ಹೆಸರಿನಲ್ಲಿ ವಿಚಾರವಾದಿ ಪತ್ರಿಕೋದ್ಯಮ ನಡೆಸಿದವರನ್ನು ಗುರುತಿಸಿ ಪ್ರತಿ ವರ್ಷವೂ ಪ್ರಶಸ್ತಿ ನೀಡಿ ಗೌರವಿಸುವ ನಿಟ್ಟಿನಲ್ಲಿ ಕಸಾಪ ಮತ್ತು ಸರ್ಕಾರ ಕ್ರಮ ಕೈಗೊಳ್ಳಲಿ ಎನ್ನುವುದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಭಿಮತ.

ಚಂಪಾ ಕನ್ನಡದ ಆಸ್ತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಂಘ ಪ್ರಾರ್ಥಿಸುತ್ತದೆ.

‍ಲೇಖಕರು Admin

January 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: