ಕಣ್ಣೂರು ವಿಶ್ವವಿದ್ಯಾಲಯದ ‘ಗಿಳಿವಿಂಡು’..

ವಿಕ್ರಮ್ ಕಾಂತಿಕೆರೆ

**

ಕಣ್ಣೂರು ವಿಶ್ವವಿದ್ಯಾಲಯದ ಬಹುಭಾಷಾ ಅಧ್ಯಯನ ಕೇಂದ್ರ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತು ಕೃತಿಕಾರ ವಿಕ್ರಮ್ ಕಾಂತಿಕೆರೆ ಅವರು ಬರೆದ ಕಿರು ಬರಹ ಇಲ್ಲಿದೆ.

**

‘ಗಿಳಿವಿಂಡು’ ಹೊರಬಂತು. ಇದು ಗೋವಿಂದ ಪೈ ಅವರ ಗಿಳಿವಿಂಡು ಅಲ್ಲ, ಬಹುಭಾಷೆಗಳ ನಾಡು ಹಾಗೂ ಬಹುಭಾಷಾ ಪಂಡಿತ ಗೋವಿಂದ ಪೈ ಅವರಿಗೆ ಗೌರವ ಸಲ್ಲಿಸಿ ಕಣ್ಣೂರು ವಿಶ್ವವಿದ್ಯಾಲಯದ ಬಹುಭಾಷಾ ಅಧ್ಯಯನ ಕೇಂದ್ರ ಪ್ರಕಟಿಸಿದ ಮಲಯಾಳಂ ಕಾವ್ಯ ಸಂಕಲನ. 70 ಕನ್ನಡ ಮತ್ತು 11 ತುಳು ಕವಿತೆಗಳ ಮಲಯಾಳಂ ಅನುವಾದದ ಕೃತಿ. ಕುವೆಂಪು, ದ.ರಾ.ಬೇಂದ್ರೆ, ಗೊವಿಂದ ಪೈ, ಕೆ.ಎಸ್.ನ, ಡಿವಿಜಿ ಸೇರಿದಂತೆ ಕನ್ನಡದ ಪ್ರಖ್ಯಾತ ಕವಿಗಳ ಕವಿತೆಗಳ ಜೊತೆಯಲ್ಲಿ ನಾನು ಅನುವಾದ ಮಾಡಿದ ಹೊಸ ತಲೆಮಾರಿನ ಕವಿಗಳ ಕೆಲವು ಕವಿತೆಗಳೂ ಇವೆ.

ಉತ್ತರ ಕರ್ನಾಟಕ, ಹಳೆ ಮೈಸೂರು ಹಾಗೂ ಕರಾವಳಿ ಕರ್ನಾಟಕದ ಭಾಗದವರ ಸಾಹಿತ್ಯವನ್ನು ನಾನು ಅನುವಾದಕ್ಕೆ ಆಯ್ಕೆ ಮಾಡಿಕೊಂಡಿದ್ದೆ. ಬಿಡುವು ಮಾಡಿಕೊಳ್ಳುವುದು ಕಡುಕಷ್ಟ ಎಂಬ ಪರಿಸ್ಥಿತಿಯಲ್ಲೂ ಭಾಷಾಂತರ ಕಾರ್ಯಕ್ಕೆ ಒತ್ತಾಸೆಯಾಗಿ ನಿಂತ ಬಹುಭಾಷಾ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎ.ಎಂ.ಶ್ರೀಧರನ್‌ ಅವರಿಗೂ ಸಂಪಾದಕ ಮಂಡಳಿಗೂ ವಿಶ್ವಾಸವಿರಿಸಿ ಕವಿತೆಗಳನ್ನು ‘ಪ್ರಯೋಗಕ್ಕೆ ಒಡ್ಡಿದ’ ಕನ್ನಡದ ಒಲವಿನ ಕವಿಗಳಿಗೂ ಹೃದಯ ತುಂಬಿದ ವಂದನೆಗಳು. ಇದು ಬಹುಭಾಷಾ ಅಧ್ಯಯನ ಕೇಂದ್ರ ಪ್ರಕಟಿಸಿದ ಮೊದಲ ಕೃತಿಯೂ ಹೌದು.

‍ಲೇಖಕರು Admin MM

June 5, 2024

ನಿಮಗೆ ಇವೂ ಇಷ್ಟವಾಗಬಹುದು…

‘ವೀರಲೋಕ’ದಿಂದ ಉತ್ತರಪರ್ವ

‘ವೀರಲೋಕ’ದಿಂದ ಉತ್ತರಪರ್ವ

ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ....

ಬೆಂಬಿಡದ ದಾಹ

ಬೆಂಬಿಡದ ದಾಹ

** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು,...

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಶ್ರೀನಿವಾಸ ಪ್ರಭು ಅಂಕಣ: ಅಂತೂ ನಾಟಕ ಅಕಾಡೆಮಿ ಪ್ರಶಸ್ತಿ ಹುಡುಕಿಕೊಂಡು ಬಂತು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This