ಶಿವಮೊಗ್ಗದ ಖ್ಯಾತ ರಂಗತಂಡ ‘ಹೊಂಗಿರಣ’ ತನ್ನ ಹೊಸ ನಾಟಕ ‘ಒಂದು ಕಾನೂನಾತ್ಮಕ ಕೊಲೆ’ಯನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿತು.
ಖ್ಯಾತ ಕಥೆಗಾರ, ನಾಟಕಕಾರ ಶಿವಕುಮಾರ ಮಾವಲಿ ಅವರ ನಾಟಕವನ್ನು ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹೊಂಗಿರಣ ಚಂದ್ರು ಅವರು ನಿರ್ದೇಶಿಸಿದ್ದರು. ಹಿರಿಯ ರಂಗ ನಿರ್ದೇಶಕ ಸಾಸ್ವೆಹಳ್ಳಿ ಸತೀಶ್ ಅವರು ಈ ನಾಟಕದಲ್ಲಿ ಅಭಿನಯಿಸಿದ್ದು ವಿಶೇಷವಾಗಿತ್ತು.
ಬೆಂಗಳೂರಿನ ಕಲಾಗ್ರಾಮದಲ್ಲಿ ಜರುಗಿದ ನಾಟಕ ಪ್ರದರ್ಶನವನ್ನು ಸಾಮಾಜಿಕ ಹಾಗೂ ರಾಜಕೀಯ ಹಕ್ಕುಗಳ ಹೋರಾಟಗಾರ್ತಿ ಡಾ. ಅಕ್ಕಯ್ ಪದ್ಮಶಾಲಿ, ಚಲನಚಿತ್ರ ನಿರ್ದೇಶಕ ಮಂಸೋರೆ, ‘ಅವಧಿ’ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರು ಉದ್ಘಾಟಿಸಿದರು.
ಈ ಪ್ರದರ್ಶನಕ್ಕೆ ‘ಅವಧಿ’ ಮಾಧ್ಯಮ ಸಹಯೋಗವಿತ್ತು.
0 ಪ್ರತಿಕ್ರಿಯೆಗಳು