ಗೊತ್ತು ಬಿಡು ಸಖಾ..

ಇಮಾಮ್ ಗೋಡೆಕಾರ

ಗದಗ ಜಿಲ್ಲೆ ಗಜೇಂದ್ರಗಡದವರು, ಈಗ ಬಳ್ಳಾರಿಯಲ್ಲಿದ್ದಾರೆ. ಒಂದೂವರೆ ದಶಕದಿಂದ ರಾಜ್ಯದ ವಿವಿಧ ಚಾನೆಲ್ ಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿ, ಈಗ ಬಳ್ಳಾರಿಯ ಗಣಿನಾಡು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಆಗಿದ್ದಾರೆ, ಕವಿತೆ, ಕತೆ, ರುಬಾಯಿ ಮತ್ತು ಗಜಲ್ ಬರೆದಿದ್ದಾರೆ.

ನನ್ನ ಹುಚ್ಚಳನ್ನಾಗಿಸುವ ಯೋಜನೆ ನಿನ್ನದು, ಗೊತ್ತು ಬಿಡು ಸಖಾ
ಮಳ್ಳ ಕಣ್ಣೀರು ಸುರಿಸುವ ವಂಚನೆ ನಿನ್ನದು, ಗೊತ್ತು ಬಿಡು ಸಖಾ

ಸುಳ್ಳು ಹೇಳಿ ಕುಹಕ ನಗೆ ಬೀರುವೆ ಏಕೆ?
ಗಾಯಗೊಳಿಸಿ ಮುಲಾಮು ಸವರುವ ಯೋಜನೆ ನಿನ್ನದು, ಗೊತ್ತು ಬಿಡು ಸಖಾ

ಬೆಳೆಸಿಕೊಂಡ ಬಯಕೆಗಳಿಗೆ ಹೇಗೆ ಹೇಳಲಿ ಸಮಾಧಾನ?
ಒಳಗೆ ಸೈತಾನ ಹೊರಗೆ ಸಂತನಂತೆ ನಟಿಸುವ ನಟನೆ ನಿನ್ನದು, ಗೊತ್ತು ಬಿಡು ಸಖಾ

ಪ್ರೀತಿಯಿಂದ ನೀ ಹೆಣೆದ ಪಂಜರ ಹೇಗೆ ಮುರಿಯಲಿ ಹೇಳು?
ಒಳ್ಳೆತನವ ಪುಡಿಗಟ್ಟಿ ಸುಳ್ಳೆ ಸುಭುಗನಾಗುವ ಭಾವನೆ ನಿನ್ನದು, ಗೊತ್ತು ಬಿಡು ಸಖಾ

ಕೊಂದರೂ ನೀನೆಂದೂ ನನ್ನವನೇ ಇಮಾಮ್
ಕನಸುಗಳಿಗೆ ಬೆಂಕಿಯಿಟ್ಟು ಗುಲಾಬಿ ನೆಡುವ ಯೊಜನೆ ನಿನ್ನದು, ಗೊತ್ತು ಬಿಡು ಸಖಾ

‍ಲೇಖಕರು Admin

October 31, 2021

ನಿಮಗೆ ಇವೂ ಇಷ್ಟವಾಗಬಹುದು…

ಭಯ ಬಿಟ್ಟಿಲ್ಲ…

ಭಯ ಬಿಟ್ಟಿಲ್ಲ…

ರಮೇಶ ಗಬ್ಬೂರ್ ರಾಗಸಂಯೋಜಿಸಿ ತಾವೇ ನುಡಿಸುತ್ತಾ ಹಾಡುವ ಹಾಡುಗಾರ, ಮುನ್ನೂರಕ್ಕೂ ಹೆಚ್ಚು ಹೋರಾಟದ ಹಾಡು ಹಾಗೂ ಅರಿವಿನ ಹಾಡುಗಳನ್ನು...

ನೀನು…

ನೀನು…

ಮರುಳಸಿದ್ದಪ್ಪ ದೊಡ್ಡಮನಿ ಗದಗ ಜಿಲ್ಲೆಯ ಹುಲಕೋಟಿಯವರು. ಕವಿತೆ, ಗಜಲ್, ಶಾಯಿರಿ ಮತ್ತು  ಹನಿಗವಿತೆ ಬರವಣಿಗೆಯಲ್ಲಿ ಹೆಚ್ಚು...

ದೊರೆ..

ದೊರೆ..

ಶಾಲಿನಿ ರುದ್ರಮುನಿ ಹುಬ್ಬಳಿಯವರು. ಸಂಗೀತ, ವೀಣೆ, ಸಾಹಿತ್ಯ ಚಿತ್ರಕಲೆಯಲ್ಲಿ ಹವ್ಯಾಸ.  ಕಥೆ, ಕವನ, ವಿಮರ್ಶೆ,  ಗಜಲ್ ಬರವಣಿಗೆ....

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This