ಆಗಸದಾಲಾಪ…

ಎಂ ವಿ ಶಶಿಭೂಷಣ ರಾಜು

ನಿಡಿಸುಯ್ದು
ನಿಟ್ಟಿಸುರ ರಾಗದಲಿ
ಭಾವ ಭಾರದ ನೋವಿನಲಿ
ಬಿಕ್ಕಳಿಸಿದ ನೋವು
ಗುಡುಗು ಸಿಡಿಲ ಜೊತೆಗೂಡಿ
ಗೊಳೋ ಎಂದು ಸುರಿಯಿತು ಕಣ್ಣೀರಧಾರೆ
ಆಗಸ ಮೊಗದ ಮೇಘ ಕಣ್ಣಿನಿಂದ

ಎನಿತು ಕಥೆಗಳ ಭಾರದಲಿ
ತಪ್ತ ಮನಗಳ ನೋವಲಿ
ಅಸಂಖ್ಯ ಅತೃಪ್ತ ಜೀವಗಳ ಎದೆಯಲಿ
ಎದೆಯಾಳದ ಭಾವವುಕ್ಕಿ
ಹಲವು  ಕಣ್ಣೀರಧಾರೆ ಜೊತೆಯಾಗಿ
ನದಿಯಾಗುತಿದೆ  

ಗದ್ಗದಿಸಿ ಕಾಲವೆಲ್ಲಾ
ದಳ್ಳಿಸುತ ಮಿಂಚ ಕಾವಿನಲಿ
ನಡುಗುತಲಿ, ಅಡಗಿರುವ ಗುಡುಗರವಕೆ
ನೀರಾವಿಗೆ ಓಲಾಡುತಿರುವ ಸಿಡಿಲ ಸೊಡರಿಗೆ
ದಿಕ್ಕುಗಾಣದೆ ಹಗುರವಾಗಲು
ಬಿಕ್ಕಳಿಸುತಿದೆ

ನಿರುತ್ತವಾಗಿರುವ ನೀರದಮನ
ಗಳಿಗೆ ಗಳಿಗೆಗೆ ರೂಪ ಬದಲಿಸಿ
ಸುತ್ತಿಸುರಳಿ ಆಳದಲಿ
ಸತ್ತಮನಕೆ ಮರುಕ ತೋರಿ
ಕರಗಿ ಹೋಗುತಿದೆ
ಬಾನ ಬಾಳಿನಲಿ

ಜಾರುತಿರುವ ಜಲವಾಗಲಿ
ಸ್ವಚ್ಚಮನಕೆ ಚೇತನ
ಗುಡುಗರವವು ಲಾಲಿಯಾಗಲಿ
ಸುಖನಿದ್ರಕೆ ಗಾಯನ
ಮಿಂಚಬಳ್ಳಿ ದಾರಿಯಾಗಲಿ
ನವಜಗದ ಸಾಧನ
ಸಿಡಿಲ ಸೊಡರು ಉರಿಸಲಿ
ನೋವುಗಳ, ಸುಖಕಾಗಲಿ ಕಾರಣ

‍ಲೇಖಕರು Admin

October 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಣೆ

ಆಣೆ

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: