ಕನ್ನಡ ಸಾಹಿತ್ಯರಂಗವು ಅಮೆರಿಕದ ವಿವಿಧ ನಗರಗಳಲ್ಲಿ ಸಾಹಿತ್ಯ ಶಿಬಿರ-ಉಪನ್ಯಾಸ ಮಾಲಿಕೆಯನ್ನು ಹಮ್ಮಿಕೊಂಡಿದೆ.
ಖ್ಯಾತ ವಿಮರ್ಶಕರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಈ ಶಿಬಿರದಲ್ಲಿ ಉಪನ್ಯಾಸವನ್ನು ನೀಡಲಿದ್ದಾರೆ.
ಈ ಹಿಂದೆ ಸಾಹಿತ್ಯ ರಂಗವು ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೂಲವಸ್ತುವಾಗಿ ಉಳ್ಳ ಒಂದು ಸಂಚಾರೀ ಶಿಬಿರವನ್ನು ಹತ್ತಾರು ಊರುಗಳಲ್ಲಿ ನಡೆಸಿತ್ತು. ಖ್ಯಾತ ಸಾಹಿತಿ ಡಾ. ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟರು ಉಪನ್ಯಾಸ ನೀಡಿದ್ದರು. ಕನ್ನಡ ಸಾಹಿತ್ಯದ ಮೊದಲ ಹೆಜ್ಜೆಯಿಂದ ಹಿಡಿದು ಆಧುನಿಕ ಕಾಲದವರೆಗೆ ಅವರು ನೀಡಿದ ಉಪನ್ಯಾಸದ ಧ್ವನಿ ಸಂಪುಟಗಳನ್ನು ಸಹ ಶಿಬಿರದಲ್ಲಿ ಭಾಗವಹಿಸಿದವರಿಗೆ ಹಂಚಲಾಗಿತ್ತು.
ಎರಡನೇ ಸಂಚಾರೀ ಶಿಬಿರವನ್ನು ಈಗ ಹಮ್ಮಿಕೊಳ್ಳಲಾಗಿದ್ದು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಳೆದ ಒಂದು ಶತಮಾನದಲ್ಲಿ ನಡೆದಿರುವ ಮತ್ತು ಇಂದು ನಡೆಯುತ್ತಿರುವ ಪ್ರಮುಖ ವಿಷಯಗಳನ್ನು ಈ ಶಿಬಿರ ಕೇಂದ್ರವಾಗಿರಿಸಿಕೊಂಡಿದೆ. .ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಶಿಬಿರದ ಸಾರಥ್ಯ ವಹಿಸಲಿದ್ದಾರೆ.
0 ಪ್ರತಿಕ್ರಿಯೆಗಳು