ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಗೋದಾವರಿ ನದೀ ತೀರದಲ್ಲಿ ಒಂದು ಆಲದಮರ ಇತ್ತು. ಆ ಮರದಲ್ಲಿ ಗಿಳಿಗಳು ಗೂಡನ್ನು ಕಟ್ಟಿಕೊಂಡು ತಮ್ಮ ಮರಿಗಳೊಡನೆ ಬಹಳ ದಿನಗಳಿಂದ ವಾಸಮಾಡಿಕೊಂಡಿದ್ದವು. ಹೀಗಿರುವಾಗ ಕಾರ್ತೀಕಮಾಸದಲ್ಲಿ ಒಂದು ದಿನ ಬಹಳ ಮಳೆಯು ಬಂದಿತು. ಆಗ ಆ ನದೀ ತೀರದಲ್ಲಿರುವ ಎಲ್ಲ ಕಪಿಗಳೂ ಶೀತವನ್ನು ತಡೆಯಲಾರದೇ ಆ ಮರದ ಬುಡದಲ್ಲಿ ಬಂದವು. ಆಗ ಆ ಮರದಲ್ಲಿನ ಗೂಡಿನಲ್ಲಿರುವ ಮರಿಗಳು ಆ ಕಪಿಗಳನ್ನು ನೋಡಿ ಹೀಗೆಂದವು. “ದೇವರು ನಿಮಗೆ ಕೈಕಾಲುಗಳನ್ನು ಕೊಟ್ಟಿದ್ದಾನೆ. ನೀವು ಮನೆಗಳನ್ನು ಕಟ್ಟಿಕೊಂಡು ಸುಖವಾಗಿ ಇರಬಹುದು. ಏಕೆ ಈ ಮರವನ್ನು ಆಶ್ರಯಿಸಿಕೊಂಡು ನೆನೆಯುತ್ತಿದ್ದೀರಾ? ನಮ್ಮ ಮಾತು ಕೇಳಿ. ಮಳೆ ನಿಂತ ಮೇಲೆ ಮನೆ ಕಟ್ಟಿಕೊಂಡು ಸುಖವಾಗಿರಿ” ಎಂದು ಉಪದೇಶಿದವು.

ಎರಡು ಮಿಲಿಯನ್ ವರ್ಷಗಳ ನಂತರ ಆ ಕಪಿಗಳು ನದೀ ತೀರದ ಮರಗಳನ್ನೆಲ್ಲಾ ನಾಶಮಾಡಿ, ಗಿಣಿ ಮತ್ತು ಇತರ ಪಕ್ಷಿಗಳಿಗೆ ನೆಲೆಯಿಲ್ಲದಂತೆ ಮಾಡಿ ಗೇಟೆಡ್ ಕಮ್ಯೂನಿಟಿ ಕಟ್ಟಿಕೊಂಡು ಸುಖವಾಗಿದ್ದವು.

ನೀತಿ:
ಮೂರ್ಖರಿಗೆ ಮಾಡುವ ಉಪದೇಶ ಅನರ್ಥಕ್ಕೆ ಕಾರಣ.

‍ಲೇಖಕರು avadhi

October 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: